ಶುಕ್ರವಾರ, ಡಿಸೆಂಬರ್ 27, 2013

ವಾಸಂತಿ

ಕವಿದಂತೆ ಮಂಜು ಈ ಹಗಲಿಗೆ
ಕವಿದಿದೆ ವಿಷಾದ ಈ ಮನಸಿಗೆ

ಹಸಿರ ಹೆಸರಿಲ್ಲ ಗಿಡಮರದಲಿ
ಹಕ್ಕಿದನಿಯಿಲ್ಲ ಪರಿಸರದಲಿ
ಜೀವಕಳೆಯಿಲ್ಲ ಬಾನ ರವಿಗೆ
ನಲ್ಲೆ, ನೀನಿಲ್ಲ ನನ್ನ ಜೊತೆಗೆ

ಹೇಮಂತಗಾನ ನಿನ್ನಗಲಿಕೆ
ಎಷ್ಟು ದಿನ ಇನ್ನೂ ಈ ಬಳಲಿಕೆ
ವಾಸಂತಿ, ಬಾರೆ ಮರಳಿ ಮನೆಗೆ
ಚೇತನವ ತಾರೆ ಜಡ ಹೃದಯಕೆ

                           - ಬಿ. ಆರ್ ಲಕ್ಷ್ಮಣರಾವ್

ಕಾಮೆಂಟ್‌ಗಳಿಲ್ಲ: