ಶುಕ್ರವಾರ, ನವೆಂಬರ್ 12, 2010

'ಜೇನಾಗುವಾ' - ಕುವೆಂಪುರವರ ವಿಶಿಷ್ಟ ಕವನ ಸಂಕಲನ..

   'ರಸಿಕ ಕವಿ' ಎಂದೇ ಪ್ರಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಸತಿಯ ಕುರಿತಾಗಿ ಬರೆದ ಕವನಗಳು ಎಲ್ಲರಿಗೂ ಚಿರಪರಿಚಿತ. ಆದರೆ ಕುವೆಂಪುರವರು ತಮ್ಮ ಪ್ರಿಯ ಪತ್ನಿ ಹೇಮಾವತಿಯಿಂದ ಸ್ಪೂರ್ತಿಗೊಂಡು ಒಂದು ಕಾವ್ಯ ಸಂಕಲನವನ್ನೇ ಬರೆದಿರುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ! ಅವರ 'ಜೇನಾಗುವಾ' ಕವನ ಸಂಕಲನದಲ್ಲಿ ಅವರು ತಮ್ಮ ಮಡದಿಯ ಪ್ರೀತಿಯಿಂದ ರೋಮಾಂಚಿತರಾಗಿ ಬರೆದ ಸಾಲುಗಳಿವೆ ; ರಸಿಕ ಬಣ್ಣನೆಗಳಿವೆ; ವಿರಹ ಗೀತೆಗಳಿವೆ.. ಜೊತೆಗೆ, ತಮ್ಮ ಮುದ್ದಿನ ಮಗುವಿನ ತುಂಟಾಟಗಳ ಬಗೆಗೆ ಬರೆದ ಕವಿತೆಗಳೂ ಇವೆ.

   ಇಲ್ಲಿ, ಅದೇ ಸಂಕಲನದಿಂದಾಯ್ದ ಕೆಲವು ಕವನಗಳಿವೆ. ಚೆಲುವಿಗಿಂತ ಒಲವೆ ಮಿಗಿಲೆಂದು ಹೇಳುವ ಅದ್ಭುತ ಕವಿತೆಯಿದೆ. ಮಲಗಿರುವ ತನ್ನಾಕೆಯನೆಬ್ಬಿಸಲು ಬಂದ ಸೂರ್ಯನೆಡೆಗೆ ಹುಸಿ ಕೋಪ ತೋರಿ ಬರೆದಿರುವ ಕವಿತೆಯಂತೂ ಸೊಗಸಾಗಿದೆ.

  ಓದಿ, ಪ್ರತಿಕ್ರಿಯಿಸಿ..

  ಅಕ್ಕರೆಯಿಂದ,
  ಕನಸು..

ಕಾಮೆಂಟ್‌ಗಳಿಲ್ಲ: