ಬುಧವಾರ, ನವೆಂಬರ್ 3, 2010

ಶುಭೋದಯ

ನವೋದಯದ ಕಿರಣ ಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ -

ನದನದಿಗಳ ನೀರಿನಲ್ಲಿ
ಗಿರಿವನಗಳ ಮುಡಿಗಳಲ್ಲಿ
ಶಿಲ್ಪ ಕಲಾ ಗಾನ ಕಾವ್ಯ
ಗುಡಿಗೋಪುರ ಶಿಖರದಲ್ಲಿ -

ಮುಗ್ಧ ಜಾನಪದಗಳಲ್ಲಿ
ದಗ್ಧ ನಗರ ಗೊಂದಲದಲಿ
ಯಂತ್ರ ತಂತ್ರದಟ್ಟಹಾಸ  
ಚಕ್ರಗತಿಯ ಪ್ರಗತಿಯಲ್ಲಿ -

ಹಳಬರಲ್ಲಿ ಹೊಸಬರಲ್ಲಿ
ಹಿರಿಯರಲ್ಲಿ ಕಿರಿಯರಲ್ಲಿ  
ಹೊಸ ಚೇತನದುತ್ಸಾಹದ
ಚಿಲುಮೆ ಚಿಮ್ಮುವುವೆದೆಗಳಲ್ಲಿ -

                                    - ಜಿ. ಎಸ್. ಶಿವರುದ್ರಪ್ಪ



ಕಾಮೆಂಟ್‌ಗಳಿಲ್ಲ: