ಶನಿವಾರ, ನವೆಂಬರ್ 6, 2010

ನೀನು ಜೊತೆಯೊಳಿರುವ ವೇಳೆ


ನೀನು ಜೊತೆಯೊಳಿರುವ ವೇಳೆ
ಬಿಗಿದು ನಿಲುವುದೆನ್ನ ಮನಸು.
ಯಾಕೊ ನಿನ್ನ ನಲಿವಿನಲ್ಲಿ
ಪಾಲುಗೊಳ್ಳದೆನ್ನ ಮನಸು.

ಅಗಲಿದೊಡನೆ ಅಂಗಲಾಚಿ
ಕೂಗಿ ಕರೆವುದೆನ್ನ ಮನಸು.
ನಿನ್ನ ದನಿಯ ಜೇನ ಹನಿಗೆ
ಚಡಪಡಿಸುವುದೆನ್ನ ಮನಸು.

ನೀನು ಪರರ ಒಡವೆಯೆಂದು
ಎಚ್ಚರಿಸುವುದೆನ್ನ ಮನಸು.
ಏನೊ ಪಾಪವೆಸಗಿದಂತೆ
ಪರಿತಪಿಸುವುದೆನ್ನ ಮನಸು.

ಇಷ್ಟು ದೂರ ಬಂದ ಬಳಿಕ
ತಿರುಗಲೊಪ್ಪದೆನ್ನ ಮನಸು.
ನಿನ್ನ ಸಂಗ ತೊರೆಯೆನೆಂಬ
ಪಣವ ತೊಡುತಲಿಹುದು ಮನಸು.

ಪಾಪ ಪುಣ್ಯ, ಒಳಿತು ಕೆಡುಕು -
ಗಣಿಸಲಾರದೆನ್ನ ಮನಸು.
ನಿನ್ನ ಪ್ರೇಮ ಕಲ್ಲೋಲದಿ
ಮುಳುಗಲೆಳಸುತಿಹುದು ಮನಸು.

                                - ಕೆ.ಎಸ್. ನಿಸಾರ್ ಅಹಮದ್.
                                ' ಬಹಿರಂತರ '

ಈ ಭಾವಗೀತೆಯನ್ನು ಆಲಿಸಲು:
http://www.kannadaaudio.com/Songs/Bhaavageethe/home/Kavanotsava.php

ಕಾಮೆಂಟ್‌ಗಳಿಲ್ಲ: